ನಾಲ್ಕೈದು ತಿಂಗಳಿಂದ ಕೊಂಡು ಇಟ್ಟುಕೊಂಡಿದ್ದ 'ಕಸ್ತೂರಿ' ಸಂಚಿಕೆಗಳನ್ನು ಇತ್ತೀಚೆಗೆ ಓದಿದೆ. ತಕ್ಷಣ ಓದಲಾಗದಿದ್ದರೂ ತಡವಾಗಿ ಆದರೂ ಓದಿದ ಸಂತೋಷ ನನ್ನದಾಯಿತು. ಒಂದರಲ್ಲಿ ಕಸ್ತೂರಿಯ ಆರಂಭದ ಕುರಿತಾದ ಸಂಗತಿಗಳಿವೆ, ಆರಂಭದಿಂದಲೂ ಕಸ್ತೂರಿಯನ್ನು ಓದಿದ ಜನರ ಅನಿಸಿಕೆಗಳಿವೆ. ಟಾಂ ಸಾಯರ್ ಸಾಹಸಗಳ ಸಂಗತಿ ಪುಸ್ತಕ ವಿಭಾಗದಲ್ಲಿ ಸಿಕ್ಕಿತು. ಮಹಾತ್ಮಾ ಗಾಂಧಿಯವರ ಕೊನೆಯ ದಿನದ ಸಂಗತಿಗಳು ವಿವರವಾಗಿ ಇಲ್ಲಿ ಬಂದಿವೆ. ಮನುಷ್ಯನಿಗೆ ಸಾವು ಸಮೀಪಿಸಿದಾಗ ಹೇಗೋ ಆತನ ಬಾಯಿಂದ ಸಾವಿನ ಕುರಿತಾದ ಮಾತುಗಳು ಬರುತ್ತವಂತೆ. ಗಾಂಧೀಗಾಗಿ ರಾತ್ರಿ ಬೇಕಾಗುವ ಯಾರೋ ಲವಂಗದ ಪುಡಿಯನ್ನು ಬೆಳಿಗ್ಗೆ ತಯಾರು ಮಾಡುವ ಸಂಬಂಧ - ಗಾಂಧಿಯವರು 'ಈಗ ಏಕೆ ಮಾಡುತ್ತ ಕೂತಿದ್ದಾರೆ? ರಾತ್ರಿ ನಾನೇ ಇರುತ್ತೇನೋ ಇಲ್ಲವೋ ' ಎನ್ನುತ್ತಾರೆ. ಪತ್ರಿಕೆಯಲ್ಲೆಲ್ಲೋ ಗಾಂಧಿಯವರು ಫೆಬ್ರುವರಿ ಒಂದರಂದು ಲಾಹೋರಿಗೆ ಹೋಗಲಿದ್ದಾರೆ ಎಂಬ ಸಂಗತಿ ಅಚ್ಚಾಗಿರುತ್ತದೆ, ಅದಕ್ಕೆ ಗಾಂಧಿಯವರು 'ಫೆಬ್ರುವರಿ ಒಂದರಂದು ಲಾಹೋರಿಗೆ ಹೋಗುವ ಗಾಂಧಿ ಯಾರೋ? ' ಎಂದು ಪ್ರತಿಕ್ರಿಯಿಸುತ್ತಾರೆ ಎಂಬಂತಹ ಸಂಗತಿಗಳು ಮೈನವಿರೇಳಿಸುತ್ತವೆ. ಬ್ರಿಟಿಷರ ವಿರುದ್ದ ಬಂಡೆದ್ದ ನರಗುಂದ ಬಾಬಾಸಾಹೇಬನು ಗಲ್ಲಿಗೇರಲಿಲ್ಲವಂತೆ. ಈತನ ಹೆಂಡತಿ ಧಾರವಾಡದ ಕಲೆಕ್ಟರನ ಹೆಂಡತಿಯನ್ನು ಹಾವಿನ ಕಡಿತದಿಂದ ಸಾಯುವುದನ್ನು ತಪ್ಪಿಸಿದ್ದಳಂತೆ. ಈತನನ್ನ ಗಲ್ಲಿಗೇರಿಸಬೇಕಾದ ಅಧಿಕಾರಿಯು ಅದೇ ಕ...
ಧಮ೯ ವೆಂಬ ವೃಕ್ಷಕ್ಕೆ ಮನಸ್ಸೇ ಬೇರು - ಸಂಸಾರದಲ್ಲಿ ಸಂಸತ್ತನ್ನು ದಾನ ಮಾಡುವದೇ ದೊಡ್ಡ ತಪಸ್ಸು . ಸಂಪತ್ತಿನ ದಾನವು ಪ್ರಾಣದಾನ. ಪ್ರಾಣವು ಸಂಪತ್ತಿನಲ್ಲಿ ಬಂಧಿತವಾಗಿದೆ . ಕರುಣೆಯಿಂದ ವ್ಯಾಕುಲನಾದ ಬುದ್ಧನು ಬೇರೆಯವರಿಗಾಗಿ ಆತ್ಮವನ್ನೇ ಹುಲ್ಲುಕಡ್ಡಿಯಂತೆ ಡಾನ್ ಮಾಡಿದನು. ಇನ್ನು ತುಚ್ಚವಾದ ಹಣದಿಂದ ಏನು? ಪ್ರಾಜ್ಞನು ಎಲ್ಲ ಆಸೆಗಳಿಂದ ದೂರವಾಗಿ ಶರೀರ ಇರುವ ತನಕ ಸಮ್ಯಕ್ ಜ್ಞಾನವನ್ನು ಪಡೆಯಲು ಪ್ರಾಣಿಗಳಿಗೆ ಹಿತವನ್ನು ಉಂಟು ಮಾಡಬೇಕು. ಸಂಸಾರದಲ್ಲಿ ಪರೋಪಕಾರವೊಂದೇ ಸಾರವುಳ್ಳದ್ದು.ಆದ್ದರಿಂದ ಈ ಶರೀರದಿಂದ ಪ್ರಾಣಿಗಳಿಗೆ ಹಿತವನ್ನು ಉಂಟು ಮಾಡೋಣ. ಅವನು ನನಗೆ ಕೆಟ್ಟದ್ದನ್ನ ಮಾಡಿಲ್ಲ , ಉಪಕಾರವನ್ನು ಮಾಡಿದ್ದಾನೆ. ಇಲ್ಲದಿದ್ದರೆ ನಾನು ಯಾರನ್ನು ಕ್ಷಮಿಸಬಹುದಿತ್ತು ? ಪ್ರಾಜ್ಞರಿಗೆ ತಮ್ಮ ದೇಹದ ಮೇಲೇ ಮಮಕಾರವು ಇಲ್ಲದ ಮೇಲೆ ಹೆಂಡತಿ ಮಕ್ಕಳು ತೃಣ ಸಮಾನ. ರಾಜನೂ ಸಹ ಅವಳ ಚಿಂತೆಯನ್ನು ಬಿಟ್ಟು, ಮಂತ್ರಿಯ ಮಾತನ್ನು ನೆನೆಯುತ್ತಾ ತನಗೆ ಲಭ್ಯವಾದ ರಾಜ್ಯ, ಪತ್ನಿ, ಸುತರೊಂದಿಗೆ , ( ಅವರ / ಅದರ ಮಹತ ವನ್ನು ತಿಳಿದು) ಆನಂದದಿಂದ ಇದ್ದನು. ನೀತಿ ಎಂಬ ಕಲ್ಪವೃಕ್ಷದ ಬಳ್ಳಿ ಫಲ ನೀಡಿಯೇ ತೀರುತ್ತದೆ ವಸ್ತ್ರಗಳನ್ನೂ ಆಭರಣಗಳನ್ನೂ ನೀಡಿ ಗೌರವಿಸಿದನು
Comments