Posts

Showing posts from September, 2008
ಮುಂಬೈ, ಎಂತಹ ಐಡಿಯಾ ! ನೀವು ಇತ್ತೀಚೆಗೆ ಮುಂಬೈ ನಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸ್ತಾ ಇರಬಹುದು . ಅದೇ ಮರಾಠೀ ಭಾಷಿಕರ ಮತ್ತು ಹೊರಗಿನಿಂದ ಬಂದವರ ತಿಕ್ಕಾಟದ ವಿಷಯ . ಇದೇ ಸಮಯಕ್ಕೆ ಐಡಿಯಾ ಎಂಬ ಟೆಲಿಕಾಂ ಸಂಸ್ಥೆ ಮುಂಬೈ ಪ್ರವೇಶಿಸಿದೆ . ಎಲ್ಲೆಡೆ ಅದರ ದೊಡ್ಡ ಹೋರ್ಡೀಂಗ್ ಗಳು ತಲೆಯೆತ್ತಿವೆ - ಅವುಗಳ ವಿಷಯ ಹೀಗೆ ... ಬೇರೆ ಬೇರೆ ಜನರ ಚಿತ್ರಗಳಿವೆ . ಜತೆಗೆ ಇವನು ಪುಣೆಯವನು , ಮುಂಬೈಯವನಲ್ಲ !? ಇವನು ಗುಜರಾತಿನವನು , ಮುಂಬೈಯವನಲ್ಲ !? ಇವನು ಪಂಜಾಬಿನವನು , ಮುಂಬೈಯವನಲ್ಲ !? ...ಇತ್ಯಾದಿ . ಎಂಬ ವಾಕ್ಯಗಳಿವೆ . ಈ ಸರಣಿಯಲ್ಲಿ ಕೊನೆಯದು . ಈ ಪ್ರಶ್ನೆಗೆ ಉತ್ತರ ಎಂಬಂತೆ , ಒಬ್ಬ ಮೊಬೈಲು ಕೈಯ್ಯಲ್ಲಿ ಹಿಡಕೊಂಡು ಹೇಳ್ತಿದ್ದಾನೆ . ನನ್ನ ನಂಬರ್ ಮುಂಬಯಿಯದು , ಆದಕಾರಣ ನಾನು ಮುಂಂಬಯಿಯವನು . ! ಅದಕ್ಕೆ ಒಂದು ಟ್ಯಾಗ್ ಲೈನ್ - ಮುಂಬೈ , ವ್ಹಾಟ್ ಎನ್ ಐಡಿಯಾ ! ಈ ಐಡಿಯಾ ಸಂಸ್ಥೆಯ ಜಾಹೀರಾತುಗಳನ್ನು ನೀವು ಟೀವೀ ಮತ್ತು ಇತರೆಡೆ ನೋಡಿರಬಹುದು . ಎಲ್ಲರೂ ಜಾತಿ ಭಾಷೆ ಇತ್ಯಾದಿಗಳು ಸೂಚಿಸುವ ಹೆಸರುಗಳ ಬದಲಾಗಿ ನಂಬರುಗಳಾಗಿ ಬಿಟ್ಟಿರೋದು , ಅಭಿಷೇಕ್ ಬಚ್ಚನ್ ಇರುವ ಜಾಹೀರಾತುಗಳನ್ನು ನೋಡಿದ್ದೀರಿ ತಾನೇ ?
ನಿನ್ನ ಕಂಗಳ ಹೊರತಾಗಿ ನಿನ್ನ ಕಂಗಳ ಹೊರತಾಗಿ ಜಗತ್ತಿನಲ್ಲಿ ಇರುವದಾದರೂ ಏನು ? ತೆರೆದಾಗ ಇವು ಬೆಳಗು , ಮುಚ್ಚಿದಾಗ ಸಂಜೆ , ನನ್ನ ಬದುಕೂ ಸಾವೂ ಈ ರೆಪ್ಪೆಗಳ ಕೆಳಗೆ ಈ ಕಣ್ಣರೆಪ್ಪೆಗಳ ಸಂದಿನಲ್ಲಿ ವಸಂತ ನಲಿಯುತಿದೆ ನನ್ನ ಕನಸುಗಳು ಇಲ್ಲಿ ಅಲೆಯುತಿವೆ ಈ ಕಂಗಳಲ್ಲಿ ನನ್ನ ಬರಲಿರುವ ದಿನಗಳ ಚಿತ್ರ ಇದೆ ಬಯಕೆಯ ಕಾಡಿಗೆಯಲಿ ಬರೆದ ನನ್ನ ಭಾಗ್ಯವಿದೆ . ( ತೇರೀ ಆಂಖೋಂ ಕೆ ಸಿವಾ ದುನಿಯಾ ಮೆ ರಖಾ ಕ್ಯಾ ಹೈ? ಎಂಬ ಹಿಂದಿ ಸಿನಿಮಾ ಹಾಡಿನ ಅನುವಾದ ಇದು)