Posts

A Page

 Page A  (To add to navigation bar)

ಕಥಾಸರಿತ್ಸಾಗರ

ಧಮ೯ ವೆಂಬ ವೃಕ್ಷಕ್ಕೆ ಮನಸ್ಸೇ ಬೇರು - ಸಂಸಾರದಲ್ಲಿ ಸಂಸತ್ತನ್ನು ದಾನ ಮಾಡುವದೇ ದೊಡ್ಡ ತಪಸ್ಸು . ಸಂಪತ್ತಿನ ದಾನವು ಪ್ರಾಣದಾನ.  ಪ್ರಾಣವು ಸಂಪತ್ತಿನಲ್ಲಿ  ಬಂಧಿತವಾಗಿದೆ . ಕರುಣೆಯಿಂದ ವ್ಯಾಕುಲನಾದ ಬುದ್ಧನು ಬೇರೆಯವರಿಗಾಗಿ  ಆತ್ಮವನ್ನೇ ಹುಲ್ಲುಕಡ್ಡಿಯಂತೆ ಡಾನ್ ಮಾಡಿದನು. ಇನ್ನು ತುಚ್ಚವಾದ ಹಣದಿಂದ  ಏನು? ಪ್ರಾಜ್ಞನು ಎಲ್ಲ ಆಸೆಗಳಿಂದ ದೂರವಾಗಿ ಶರೀರ ಇರುವ ತನಕ ಸಮ್ಯಕ್ ಜ್ಞಾನವನ್ನು ಪಡೆಯಲು ಪ್ರಾಣಿಗಳಿಗೆ ಹಿತವನ್ನು ಉಂಟು ಮಾಡಬೇಕು. ಸಂಸಾರದಲ್ಲಿ ಪರೋಪಕಾರವೊಂದೇ ಸಾರವುಳ್ಳದ್ದು.ಆದ್ದರಿಂದ ಈ ಶರೀರದಿಂದ ಪ್ರಾಣಿಗಳಿಗೆ ಹಿತವನ್ನು ಉಂಟು ಮಾಡೋಣ. ಅವನು ನನಗೆ ಕೆಟ್ಟದ್ದನ್ನ ಮಾಡಿಲ್ಲ , ಉಪಕಾರವನ್ನು ಮಾಡಿದ್ದಾನೆ. ಇಲ್ಲದಿದ್ದರೆ ನಾನು ಯಾರನ್ನು ಕ್ಷಮಿಸಬಹುದಿತ್ತು ?  ಪ್ರಾಜ್ಞರಿಗೆ ತಮ್ಮ ದೇಹದ ಮೇಲೇ ಮಮಕಾರವು ಇಲ್ಲದ ಮೇಲೆ ಹೆಂಡತಿ ಮಕ್ಕಳು ತೃಣ ಸಮಾನ.  ರಾಜನೂ ಸಹ ಅವಳ ಚಿಂತೆಯನ್ನು ಬಿಟ್ಟು, ಮಂತ್ರಿಯ ಮಾತನ್ನು ನೆನೆಯುತ್ತಾ ತನಗೆ ಲಭ್ಯವಾದ ರಾಜ್ಯ, ಪತ್ನಿ, ಸುತರೊಂದಿಗೆ  , ( ಅವರ / ಅದರ ಮಹತ ವನ್ನು ತಿಳಿದು) ಆನಂದದಿಂದ ಇದ್ದನು. ನೀತಿ ಎಂಬ ಕಲ್ಪವೃಕ್ಷದ ಬಳ್ಳಿ ಫಲ ನೀಡಿಯೇ ತೀರುತ್ತದೆ ವಸ್ತ್ರಗಳನ್ನೂ ಆಭರಣಗಳನ್ನೂ ನೀಡಿ ಗೌರವಿಸಿದನು

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ನಾಲ್ಕೈದು ತಿಂಗಳಿಂದ ಕೊಂಡು ಇಟ್ಟುಕೊಂಡಿದ್ದ 'ಕಸ್ತೂರಿ' ಸಂಚಿಕೆಗಳನ್ನು ಇತ್ತೀಚೆಗೆ ಓದಿದೆ. ತಕ್ಷಣ ಓದಲಾಗದಿದ್ದರೂ ತಡವಾಗಿ ಆದರೂ ಓದಿದ ಸಂತೋಷ ನನ್ನದಾಯಿತು. ಒಂದರಲ್ಲಿ ಕಸ್ತೂರಿಯ ಆರಂಭದ ಕುರಿತಾದ ಸಂಗತಿಗಳಿವೆ, ಆರಂಭದಿಂದಲೂ ಕಸ್ತೂರಿಯನ್ನು ಓದಿದ ಜನರ ಅನಿಸಿಕೆಗಳಿವೆ. ಟಾಂ ಸಾಯರ್ ಸಾಹಸಗಳ ಸಂಗತಿ ಪುಸ್ತಕ ವಿಭಾಗದಲ್ಲಿ ಸಿಕ್ಕಿತು. ಮಹಾತ್ಮಾ ಗಾಂಧಿಯವರ ಕೊನೆಯ ದಿನದ ಸಂಗತಿಗಳು ವಿವರವಾಗಿ ಇಲ್ಲಿ ಬಂದಿವೆ. ಮನುಷ್ಯನಿಗೆ ಸಾವು ಸಮೀಪಿಸಿದಾಗ ಹೇಗೋ ಆತನ ಬಾಯಿಂದ ಸಾವಿನ ಕುರಿತಾದ ಮಾತುಗಳು ಬರುತ್ತವಂತೆ. ಗಾಂಧೀಗಾಗಿ ರಾತ್ರಿ ಬೇಕಾಗುವ ಯಾರೋ ಲವಂಗದ ಪುಡಿಯನ್ನು ಬೆಳಿಗ್ಗೆ ತಯಾರು ಮಾಡುವ ಸಂಬಂಧ - ಗಾಂಧಿಯವರು 'ಈಗ ಏಕೆ ಮಾಡುತ್ತ ಕೂತಿದ್ದಾರೆ? ರಾತ್ರಿ ನಾನೇ ಇರುತ್ತೇನೋ ಇಲ್ಲವೋ ' ಎನ್ನುತ್ತಾರೆ. ಪತ್ರಿಕೆಯಲ್ಲೆಲ್ಲೋ ಗಾಂಧಿಯವರು ಫೆಬ್ರುವರಿ ಒಂದರಂದು ಲಾಹೋರಿಗೆ ಹೋಗಲಿದ್ದಾರೆ ಎಂಬ ಸಂಗತಿ ಅಚ್ಚಾಗಿರುತ್ತದೆ, ಅದಕ್ಕೆ ಗಾಂಧಿಯವರು 'ಫೆಬ್ರುವರಿ ಒಂದರಂದು ಲಾಹೋರಿಗೆ ಹೋಗುವ ಗಾಂಧಿ ಯಾರೋ? ' ಎಂದು ಪ್ರತಿಕ್ರಿಯಿಸುತ್ತಾರೆ ಎಂಬಂತಹ ಸಂಗತಿಗಳು ಮೈನವಿರೇಳಿಸುತ್ತವೆ. ಬ್ರಿಟಿಷರ ವಿರುದ್ದ ಬಂಡೆದ್ದ ನರಗುಂದ ಬಾಬಾಸಾಹೇಬನು ಗಲ್ಲಿಗೇರಲಿಲ್ಲವಂತೆ. ಈತನ ಹೆಂಡತಿ ಧಾರವಾಡದ ಕಲೆಕ್ಟರನ ಹೆಂಡತಿಯನ್ನು ಹಾವಿನ ಕಡಿತದಿಂದ ಸಾಯುವುದನ್ನು ತಪ್ಪಿಸಿದ್ದಳಂತೆ. ಈತನನ್ನ ಗಲ್ಲಿಗೇರಿಸಬೇಕಾದ ಅಧಿಕಾರಿಯು ಅದೇ ಕ

ಗಾಂಧೀಜಿಯೂ ಈಶೋಪನಿಷತ್ತೂ

ಇತ್ತೀಚೆಗೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಿಂದ ಇಳಿಸಿಕೊಂಡ ಒಂದು ಮಹಾತ್ಮಾಗಾಂಧೀಯವರ ಪುಸ್ತಕ-"ಜೀವನ ಶಿಕ್ಷಣ"ವನ್ನು ಓದುತ್ತಿದ್ದೆ. ಪ್ರಾರಂಭದಲ್ಲಿ ಅವರ ಕೆಲವು ಅನಿಸಿಕೆ/ಹೇಳಿಕೆಗಳನ್ನು ಕೊಟ್ಟಿದ್ದಾರೆ. ಅವುಗಳಲ್ಲಿ ಕೆಲವು ಗಮನಿಸುವಂತಹವು , ಕೆಲವು ಮತ್ತೆ ಮತ್ತೆ ಮೆಲುಕು ಹಾಕುವಂತಹವು, ನನಗಾಗಿ ಸಂಗ್ರಹಿಸಿಕೊಂಡ ಅವನ್ನು ನಿಮಗಾಗಿ ಇಲ್ಲಿ ಕುಟ್ಟಿದ್ದೇನೆ ( ಅಷ್ಟೇ ಅಲ್ಲ , ಈಶೋಪನಿಷತ್ತಿನ ಬಗ್ಗೆ ಅವರ ಒಂದು ಹೇಳಿಕೆಯಿಂದಾಗಿ ಈಶೋಪನಿಷತ್ತನ್ನು ತಿರುವಿ ಹಾಕಿದ ಬಗ್ಗೆಯೂ ಮುಂದಕ್ಕೆ ಬರೆದಿದ್ದೇನೆ). --ನಾನೊಬ್ಬ ಸತ್ಯಶೋಧಕ, ಅದಕ್ಕೊಂದು ಮಾರ್ಗವನ್ನು ಕಂಡುಹಿಡಿದಿದ್ದೇನೆ ಎಂದು ನನ್ನ ವಿಶ್ವಾಸ. ಅದರ ಸಿದ್ಧಿಗಾಗಿ ನಾನ್ನು ನಿರಂತರ ಪ್ರಯತ್ನಶೀಲನಾಗಿದ್ದೇನೆ ಎಂಬುದು ನನ್ನ ನಂಬಿಕೆ. ...... ನನ್ನ ನ್ಯೂನತೆಗಳು ಎಷ್ಟೆಂಬುದನ್ನು ನಾನು ವ್ಯಸನದಿಂದ ಅರಿತಿದ್ದೇನೆ. ಆ ಅರಿವು ನನಗೆ ದುಃಖ ತರುವಷ್ಟಿದೆ. ಆ ಅರಿವೇ ನನ್ನ ಸರ್ವಶಕ್ತಿಯ ಮೂಲ; ಏಕೆಂದರೆ ತನ್ನ ದೌರ್ಬಲ್ಯಗಳ ಅರಿವಾಗುವುದೇ ಮಾನವನಿಗೆ ಒಂದು ಅಪೂರ್ವ ಬಲ. --ದಾರಿ ನನಗೆ ಗೊತ್ತು. ಅದು ನೇರ ಮತ್ತು ಇಕ್ಕಟ್ಟು -ಕತ್ತಿಯ ಅಲಗಿನಂತೆ. ಅದರ ಮೇಲೆ ನಡೆವುದೆಂದರೆ(*) ನನಗೆ ಉಲ್ಲಾಸ, ಜಾರಿದಾಗಲೆಲ್ಲ ಕಣ್ಣೀರಿಡುತ್ತೇನೆ. ....ನನ್ನ ದೌರ್ಬಲ್ಯದ ಪರಿಣಾಮವಾಗಿ ಸಾವಿರ ಬಾರಿ ಸೋತರೂ ನಾನು ಎಂದಿಗೂ ಶೃದ್ಧೆಗೆಡುವುದಿಲ್ಲ. --ಸತ್ಯವೇ ಭಗವಂತನು , ನನ್ನ ಪಾಲಿಗೆ ಭಗವ

ASCII ಫಾಂಟ್ ನಲ್ಲಿರುವ ಕನ್ನಡವನ್ನು ಓದಲು ಆಗುತ್ತಿಲ್ಲವೇ ?

ನಾನು ನನ್ನ ಪರ್ಸನಲ್ ಕಂಪ್ಯೂಟರಿನಲ್ಲಿ ಲೀನಕ್ಸ್ ನ ಉಬುಂಟು ವನ್ನು ಹಾಕಿಕೊಂಡು ಬಳಸುತ್ತಿದ್ದೇನೆ. ಬಹುತೇಕ ಕನ್ನಡ ತಾಣಗಳು ಉಬುಂತುವಲ್ಲಿ ಇರುವುವಾದರೂ ಅಲ್ಲೊಂದು ಇಲ್ಲೊಂದು ವೆಬ್ ಪುಟಗಳು ಬರಹವನ್ನೋ ನುಡಿಯನ್ನೋ ಅಥವಾ ಮತ್ತಾವುದನ್ನೋ ಬಳಸಿ ಬರೆದವಾದಲ್ಲಿ ಓದಲೇ ಆಗುತ್ತಿರಲಿಲ್ಲ . ಬಹುಶಃ ವಿಂಡೋಸ್ ನಲ್ಲಿ ಕೂಡ ಸಂಬಂಧಪಟ್ಟ ಫಾಂಟ್ ಇಲ್ಲದಿದ್ದರೆ ಅಲ್ಲೂ ಕಾಣಿಸಲಿಕ್ಕಿಲ್ಲ. ಅಂಥ ಸಮಯದಲ್ಲಿ ಇವತ್ತು ಗೂಗಲ್ ನಲ್ಲಿ ಹುಡುಕಿದಾಗ ಸಿಕ್ಕ ಕೊಂಡಿ ಇದು. http://aravindavk.in/ascii2unicode/ ಆ ಪುಟದಲ್ಲಿ ನುಡಿ/ಬರಹದಲ್ಲಿ ಬರೆದಿದ್ದನ್ನು ಯುನಿಕೋಡ್ ಕನ್ನಡಕ್ಕೆ ಬದಲಾಯಿಸಲು ಸಹಾಯ ಮಾಡುವ ತಂತ್ರಾಂಶ ಇದೆ. ಎಡಗಡೆ ಇರುವ ಜಾಗದಲ್ಲಿ ನುಡಿ/ಬರಹ ದಲ್ಲಿ ಬರೆದ ಪಠ್ಯವನ್ನು ಹಾಕಿ ನಂತರ ಕನ್ವರ್ಟ್ ಅಂತ ಇರುವ ಬಟನ್ ಒತ್ತಿ. ಪಕ್ಕದ ಜಾಗದಲ್ಲಿ ಯುನಿಕೋಡ್ ಗೆ ಬದಲಾವಣೆಗೊಂಡು ಕಾಣಿಸುತ್ತದೆ. ಅರವಿಂದರಿಗೆ ತುಂಬಾಆಆಆಆಆಆಆ ಧನ್ಯವಾದಗಳು.

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"

೧೯೩೨ ರಲ್ಲಿ ಅಚ್ಚಾದ ಒಂದು ಪತ್ತೇದಾರಿ ನೀಳ್ಗತೆಯೊಂದನ್ನು ನಾನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಈ ಕೊಂಡಿಯಲ್ಲಿ ಇಳಿಸಿಕೊಂಡು ಓದಿದೆ. ಅದರ ಹೆಸರು - ಎರಡೆರಡು ಹೆಸರು ಕೊಡುವ ಹಳೆಯ ವಾಡಿಕೆಯಂತೆ - "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !" ಧಾರವಾಡದ ಬಳಿಯ ಆನಂದವನ, ಅಗಡಿಯ ಶ್ರೀ ಶೇಷಾಚಲ ಪ್ರೆಸ್ಸ್ ಮತ್ತು ಗ್ರಂಥಮಾಲೆಯ ಪ್ರಕಟಣೆ ಇದು. ಕನ್ನಡ, ದೇವನಾಗರೀ, ರೋಮನ್ ಲಿಪಿಗಳಲ್ಲಿ ಪ್ರಕಾಶನ ಸಂಶೆಯ ಹೆಸರನ್ನು ಬರೆದಿದ್ದಾರೆ . ಅಡಿಯಲ್ಲಿ - ಮರಾಠಿಯಲ್ಲಿ ' ಹೇ ಪುಸ್ತಕ ಬಿ.ಪ.ಕಾಳೆ , ಯಾನೀ ಅನಂದವನ-ಅಗಡಿ ಯೇಥೀಲ ಆಪಲ್ಯಾ ಶ್ರೀ ಶೇಷಾಚಲ ಛಾಪಖಾನ್ಯಾತ ಛಾಪಿಲೆ' ಅಂತ ಮರಾಠಿ-ದೇವನಾಗರಿಯಲ್ಲಿ ಮುದ್ರಿಸಿದ್ದಾರೆ! ಇದು ಸದ್ಬೋಧಚಂದ್ರಿಕೆಯ 'ಆಷಾಢ ಶಕೆ ೧೮೫೪, july 1932'ರ ನಾಲ್ಕನೇ ಸಂಚಿಕೆ . ಈ ಅಗಡಿಯ ಶೇಷಾಚಲ ಸಂಸ್ಥೆ, ಅಲ್ಲಿಯ ಶೇಷಾಚಲ ಸಾಧುಗಳು ಮಾಡಿದ ಕನ್ನಡ ಸೇವೆ ಅಪಾರವಾಗಿದ್ದಿರಬೇಕು. ಇರಲಿ. ಈ ಪುಸ್ತಕವನ್ನು ತಿರುವಿ ಹಾಕಿದಾಗ ...... ಈ ಕತೆಯು ೨೫ ಪುಟಗಳದ್ದು. ಪ್ರತಿ ಅಧ್ಯಾಯಕ್ಕೆ ಒಂದು ತಲೆಬರಹ - ಮತ್ತು ಒಂದು ಅಡಿಬರಹ . ಆ ತಲೆಬರಹಗಳು , ಅಡಿಬರಹಗಳು , ಒಳಗಿನ ಹೂರಣ ಏನೆಂದು ನೋಡೋಣ ಬನ್ನಿ . ೧) ಇದ್ದ ಮೂವರಲ್ಲಿ ಕದ್ದವರಾರು ? - (ರವಿಕಾಣದುದಂ ಕವಿ ಕಾಂಬಂ) ಒಂದು ಬ್ಯಾಂಕು , ಅಲ್ಲಿ ತಿಜೋರಿ , ಅದನ್ನು ತೆಗೆಯಬಲ್ಲವರು ಇಬ್ಬರು , ಮ್ಯಾನೇಜರೂ

ಪುಸ್ತಕನಿಧಿ-ನವರತ್ನ ರಾಮರಾವ್ ಅವರ 'ಕೆಲವು ನೆನಪುಗಳು'

ಈಗ ನವರತ್ನ ರಾಮರಾವ್ ಅವರ 'ಕೆಲವು ನೆನಪುಗಳು' ಎಂಬ ಪುಸ್ತಕವನ್ನು ಓದುತ್ತಿದ್ದೇನೆ . ನವರತ್ನ ರಾಮರಾವ್ ಅವರು ಬ್ರಿಟಿಷ್ ಸರಕಾರದ ಆಡಳಿತದಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದವರು . ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಈ ಪುಸ್ತಕದ ಬಗೆ ಅಲ್ಲಲ್ಲಿ ಓದಿದ್ದೆ. ಪುಸ್ತಕದ ಅಂಗಡಿಯಲ್ಲಿ ನೋಡಿದಾಗ, ಓದೋಣವೆಂದು ಬಹುದಿನಗಳ ಹಿಂದೆ ಕೊಂಡಿದ್ದೆ. ಈಗ ಓದುತ್ತಿದ್ದೇನೆ . ಪುಸ್ತಕವು ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ, ಅಂದಿನ ದಿನಮಾನಗಳ ಪರಿಚಯ ನಮಗಾಗುತ್ತದೆ. ಅದರಲ್ಲಿನ ಒಂದು ಪ್ರಸಂಗವನ್ನು ನಿಮ್ಮೊಡನೆ ಹಂಚಿಕೊಳ್ಳಬೇಕೆನಿಸಿತು. ಈ ಪುಸ್ತಕವು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದ (http://www.dli.gov.in/cgi-bin/metainfo.cgi?&title1=Kelavu%20Nesapugal%27u&author1=Raama%20Navaratna&subject1=GEOGRAPHY.%20BIOGRAPHY.%20HISTORY&year=1954%20&language1=kannada&pages=481&barcode=2030020027649&author2=&identifier1=&publisher1=Jiivana%20Kaaryaalaya&contributor1=&vendor1=NONE&scanningcentre1=rmsc,%20iiith%20&slocation1=NONE&sourcelib1=Osmania%20University&scannerno1=2&digitalrepublisher1=Digital%20Library%20Of%20India&a

DLI ಪುಸ್ತಕ‌ನಿಧಿ ‍‍.... ಬಾಳಿನ‌ ಗುಟ್ಟು

ಹಿಂದೆ ಎಂದೋ ಇಳಿಸಿಕೊಂಡ ಈ ಪುಸ್ತಕವನ್ನು ತೀರಾ ಇತ್ತೀಚಿಗಷ್ಟೇ ಓದಿದೆ. ಇದು ಇಂಗ್ಲಿಷ್ ನಿಂದ ಗೌರೀಶ ಕಾಯ್ಕಿಣಿ ಅವರು ಅನುವಾದ ಮಾಡಿದ ಪುಸ್ತಕ. ಪ್ರತಿಯೊಬ್ಬರ ಬದುಕು ರೂಪುಗೊಳ್ಳುವುದು ಹೇಗೆ? ನಮ್ಮ ನಿಮ್ಮ ಜೀವನ, ಸ್ವಭಾವ ಹೀಗಿರಲು ಕಾರಣಗಳೇನು? ಮಕ್ಕಳನ್ನು ಬೆಳೆಸುವಾಗ ತಾಯಿ- ತಂದೆಯರು, ಶಾಲೆಯಲ್ಲಿ ಶಿಕ್ಷಕರು ಗಮನಿಸಬೇಕಾದುದೇನು? ಇವೇ ಮು೦ತಾದ ಸಂಗತಿಗಳು ಇಲ್ಲಿ ಇವೆ. ಎಳೆಯತನದ ಯಾವೆಲ್ಲ ಸಂಗತಿಗಳು ಮನುಷ್ಯನ ಇಡೀ ಜೀವನವನ್ನು ಪ್ರಭಾವಿಸಿ ಯಶಸ್ವೀ ಜೀವನಕ್ಟೋ ವಿಫಲತೆಗೋ ಹೇಗೆ ಕಾರಣವಾಗುತ್ತವೆ ಎಂಬುದನ್ನು ಮನಗಾಣಬೇಕಾದರೆಈ ಪುಸ್ತಕವನ್ನು ನೀವು ಓದಲೇಬೇಕು. ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದಲ್ಲೂ ಈ ಪುಸ್ತಕ ಇರುವುದಾದರೂ ಉಸ್ಮಾನಿಯಾ ವಿಶ್ವವಿದ್ಯಾನಿಲಯದ ತಾಣದಲ್ಲಿ ಈ ಪುಸ್ತಕವು ಪೀಡಿಎಫ್ ರೂಪದಲ್ಲಿಯೇ ಇದೆ! ಅದರ ಕೊಂಡಿ ಇಲ್ಲಿದೆ. http://oudl.osmania.ac.in/handle/OUDL/3317
http://nannakanda.blogspot.com/ ಬ್ಲಾಗಿಷ್ಟರಿಂದ ಆಮಂತ್ರಿತರಿಗೆ ಮಾತ್ರ ; ಎಲ್ಲರಿಗೂ ಅಲ್ಲ http://suvarnaangala.blogspot.com/ ಸಂಪದಿಗರಾದ ಚಾಮರಾಜ ಸವಡಿ ಅವರು ಬರೆದ ಕಚೇರಿ ವಾತಾವರಣದ ಬಗೆಗಿನ ಕೆಲವು ಬರಹಗಳು , ಶ್ರೀದೇವಿ ಕಳಸದ ಅವರ ಕೆಲವು ಕವನಗಳು ಇಲ್ಲಿವೆ . ಒಂದು ವರ್ಷದಿಂದ ಏನೂ ಸೇರ್ಪಡೆ ಇಲ್ಲ . http://anchemane.blogspot.com/ ಆದರ್ಶ ಅಂಚೆ ಅನ್ನುವವರ ಮನೆ ಇದು . ತೂತ್ ಕಂಡೀಶನ್ ಬಸ್ಸು ಒಂದೇ ಬರಹ ಇದೆ . ಎರಡು ವರ್ಷ ಹಿಂದಿನದ್ದು. ( ನಾನು ಹೀಗೆಲ್ಲ ಬರೀತ ಹೋದರೆ ಮಲಗಿರುವ ಒಂದಿಷ್ಟು ಬ್ಲಾಗುಗಳು ಮತ್ತೆ ಎದ್ದಾವು ! ಅದೂ ಒಂಥರ ಅಳಿಲುಸೇವೆ ನನ್ನಿಂದ !!) http://antaranga.blogspot.com/ ಇಲ್ಲಿ ಮುನ್ನೂರಕ್ಕೂ ಹೆಚ್ಚು ಬರಹಗಳು ಇವೆ ... ತಡೀರಿ ಎಲ್ಲ ನೋಡಿ ಬರೀತೀನಿ!!
ಕನ್ನಡಬಲ (http://www.kannadabala.blogspot.com/) ಇದು ಕನ್ನಡಾಭಿಮಾನಿ ರೋಹಿತ್ ರಾಮಚಂದ್ರಯ್ಯ ಅವರ ಬ್ಲಾಗು . ಇಲ್ಲಿ ೭೦೦ ಕನ್ನಡ ಬ್ಲಾಗುಗಳು , ಕನ್ನಡ ತಾಣಗಳು, ಸುದ್ದಿ ತಾಣಗಳು , ಪೋರ್ಟಲ್ ಗಳು, ದ್ವಿಭಾಷಾ ತಾಣಗಳು , ಆಂಗ್ಲ ತಾಣಗಳು ಗಳ ಕೊಂಡಿಗಳು ಸಿಗುತ್ತವೆ !!
ಕನ್ನಡ ಬ್ಲಾಗುಲೋಕದಲ್ಲಿ ವಿಹಾರ kannadabala.blogspot.com ಎಂಬ ಬ್ಲಾಗಿನಲ್ಲಿ ಕನ್ನಡ ಬ್ಲಾಗ್ ಗಳ ಪಟ್ಟಿಯೇ ಸಿಕ್ಕಿತು . ಸರಿ ಎಲ್ಲ ಜಾಲಾಡೋಣ ಅಂತ ಹೊರಟೀನಿ . ಅಲ್ಲಿ ಏನೇನಿದೆ ನೋಡೋಣ .. ವಿಶೇಷ ಕಂಡದ್ದನ್ನು ತಿಳಿಸ್ತೀನಿ .... ಇದೋ ಶುರು ಕನ್ನಡಬಲದಿಂದಲೇ !!!!
ಗೋಳಾಟ ಅಯ್ಯೋ, ನಾನು ಧಡ್ಡನಾದೆನು ಅಯ್ಯೋ, ನನ್ನ ತಲೆಯು ಓಡಲೊಲ್ಲದು ಅಯ್ಯೋ, ನನಗೆ ಕೆಲಸ ಇಲ್ಲವು ಅಯ್ಯೋ, ನನಗೆ ಕೆಲಸ ಮಾಡುವ ಮನಸೂ ಇಲ್ಲವು ! ಅಯ್ಯೋ, ನನಗೆ ಹೇಳುವರಾರೂ ಇಲ್ಲವು ಅಯ್ಯೋ, ನನಗೆ ಕೇಳುವರಾರೂ ಇಲ್ಲವು ಅಯ್ಯೋ, ನಾನು ಏನೂ ಸಾಧಿಸಲಿಲ್ಲವು ಅಯ್ಯೋ, ನಾನು ಏನೂ ಸಾಧಿಸುತಿಲ್ಲವು ಅಯ್ಯೋ, ನನಗೆ ಏನೂ ಸಾಧಿಸಲಿಕ್ಕಿಲ್ಲವು ಅಯ್ಯೋ, ನನಗೆ ಸಮಾಧಾನ ಇಲ್ಲವು ಅಯ್ಯೋ, ನಾನು ಏನೂ ಕಲಿಯುತಿಲ್ಲವು ಅಯ್ಯೋ, ನನಗೆ ಏನೂ ತೋಚುತಿಲ್ಲವು ಅಯ್ಯೋ, ಇನ್ನೆರಡು ಸಾಲು ಹೊಳೆಯುತಿಲ್ಲವು ಅರೆ , ಅಂತೂ ಈ ಹಾಡನ್ನು ಪೂರ್ತಿಗೊಳಿಸಿದೆನು !
http://www.youtube.com/watch?v=mL6Sc9SU5jE ಇಲ್ಲಿ ’ಛೋಟೀ ಛೋಟೀ ಸೀ ಬಾತ್’ ಎಂಬ ಹಿಂದಿ ಚಿತ್ರದ ಹಾಡೊಂದಿದೆ . ಹಿಂದೆ ಕೇಳಿರದಿದ್ದರೆ ಈಗ ಕೇಳಿ . ಈ ಹಾಡನ್ನು ಅನುವಾದಿಸಲು ಹವಣಿಸಿದ್ದೇನೆ . ಸಾಧ್ಯವಾದಷ್ಟು , ಮೂಲದ ಲಯ , ಧಾಟಿಯನ್ನು ಇಟ್ಟುಕೊಂಡಿದ್ದೇನೆ. ಹೀಗೇತಕೋ ಆಗೋದು ಬದುಕಲಿ ನಾನರಿಯೆನೂ ! ಹೋದ ಮೇಲೆ ಯಾರೋ ಕಾಡೋದು ನೆನಪು ಅವರದೂ , ಸಣ್ಣ ಸಣ್ಣವೇ ವಿಷಯಾ ! ಅರಿವಿಲ್ಲದೆ ಕಳೆದ ಕ್ಷಣಗಳೂ , ಬಣ್ಣ ಬದಲಿಸಿ ಕ್ಷಣಾ ಕ್ಷಣಾ , ಮನಸಿಗೇ ತಲ್ಲಣಾ , ಹೆದರಿಕೆ ತುಂಬುತಾ , ಸಜ್ಜುಗೊಳ್ಳದೇ ಒಡೆದು ಹೋಯಿತೇ , ಅಯ್ಯೋ , ನನ್ನ ಕನಸಿನರಮನೆ ? ಅದೇ ಹಾದಿಯೂ , ಅಲ್ಲೇ ನಡಿಗೆಯೂ , ಆದರೆ ಇಲ್ಲ ನನ್ ಜತೇ , ನನ್ ಜತೆ ನಡೆವಾತನೂ , ಹುಡುಕಿವೆ ಅವನನೂ ಅತ್ತ ಇತ್ತ ಕಂಗಳೂ ... ಕಳೆದುಕೊಂಡೆನೇ ಆ ಸಂಜೆ ಸುಮಧುರ ? ಆ ನನ್ನ ದಿನಗಳ , ಆ ನನ್ನ ಅವನನು ?
ವೀರ್ ಝಾರಾ ಚಿತ್ರದ ... ತೇರೇಲಿಯೇ ಹಂ ಹೈ ಜಿಯೇ ಹರ ಆಂಸೂ ಪಿಯೇ ... ಹಾಡಿನ ಅನುವಾದ ಪ್ರಯತ್ನ ... ನಿನಗಾಗಿಯೇ ನಾ ಬದುಕಿಹೆ ಕಣ್ಣೀರನೇ ಕುಡಿಯುತ, ಆದರೂನು ಆರದು ಬಯಕೆಯ ಬೆಂಕಿಯು, ನಿನಗಾಗಿಯೇ ನಾ ಬದುಕಿಹೆ ಹೊಲ್ ಕೊಂಡು ತುಟಿಗಳ ( :) ) ಬದುಕಿದು ತಂದು ಇತ್ತಿತು ಕಳೆದ ದಿನಗಳ ಪುಸ್ತಕ, ಈಗ ನಮ್ಮನು ಮುತ್ತಿವೆ ಆ ದಿನಗಳ ನೆನಪುಗಳು, ಕೇಳದೆಯೇ ದೊರಕಿವೆ ಎನಿತೊಂದು ಉತ್ತರ, ಬಯಸಿದೆವು ಏನನು , ಪಡೆದೆವು ಏನನ ನಾವು , ನೋಡಿರಿ ಜಗವಿದು ನಮ್ಮೊಂದಿಗೆ ಸಾಧಿಸಿತು ವೈರವ ..?....?......?... ............. ............. ............ ( ಇಲ್ಲಿನ ಸಾಲುಗಳು ಸರಿಯಾಗಿ ಸಿಕ್ಕಿಲ್ಲ ) ಲೋಕವು ನಿಷ್ಕಾರಣ ದ್ವೇಷವ ಮಾಡಿತು ...