ಕಥಾಸರಿತ್ಸಾಗರ

ಧಮ೯ ವೆಂಬ ವೃಕ್ಷಕ್ಕೆ ಮನಸ್ಸೇ ಬೇರು -

ಸಂಸಾರದಲ್ಲಿ ಸಂಸತ್ತನ್ನು ದಾನ ಮಾಡುವದೇ ದೊಡ್ಡ ತಪಸ್ಸು . ಸಂಪತ್ತಿನ ದಾನವು ಪ್ರಾಣದಾನ.  ಪ್ರಾಣವು ಸಂಪತ್ತಿನಲ್ಲಿ  ಬಂಧಿತವಾಗಿದೆ . ಕರುಣೆಯಿಂದ ವ್ಯಾಕುಲನಾದ ಬುದ್ಧನು ಬೇರೆಯವರಿಗಾಗಿ  ಆತ್ಮವನ್ನೇ ಹುಲ್ಲುಕಡ್ಡಿಯಂತೆ ಡಾನ್ ಮಾಡಿದನು. ಇನ್ನು ತುಚ್ಚವಾದ ಹಣದಿಂದ  ಏನು?

ಪ್ರಾಜ್ಞನು ಎಲ್ಲ ಆಸೆಗಳಿಂದ ದೂರವಾಗಿ ಶರೀರ ಇರುವ ತನಕ ಸಮ್ಯಕ್ ಜ್ಞಾನವನ್ನು ಪಡೆಯಲು ಪ್ರಾಣಿಗಳಿಗೆ ಹಿತವನ್ನು ಉಂಟು ಮಾಡಬೇಕು.
ಸಂಸಾರದಲ್ಲಿ ಪರೋಪಕಾರವೊಂದೇ ಸಾರವುಳ್ಳದ್ದು.ಆದ್ದರಿಂದ ಈ ಶರೀರದಿಂದ ಪ್ರಾಣಿಗಳಿಗೆ ಹಿತವನ್ನು ಉಂಟು ಮಾಡೋಣ.

ಅವನು ನನಗೆ ಕೆಟ್ಟದ್ದನ್ನ ಮಾಡಿಲ್ಲ , ಉಪಕಾರವನ್ನು ಮಾಡಿದ್ದಾನೆ.
ಇಲ್ಲದಿದ್ದರೆ ನಾನು ಯಾರನ್ನು ಕ್ಷಮಿಸಬಹುದಿತ್ತು ?


 ಪ್ರಾಜ್ಞರಿಗೆ ತಮ್ಮ ದೇಹದ ಮೇಲೇ ಮಮಕಾರವು ಇಲ್ಲದ ಮೇಲೆ ಹೆಂಡತಿ ಮಕ್ಕಳು ತೃಣ ಸಮಾನ.


 ರಾಜನೂ ಸಹ ಅವಳ ಚಿಂತೆಯನ್ನು ಬಿಟ್ಟು, ಮಂತ್ರಿಯ ಮಾತನ್ನು ನೆನೆಯುತ್ತಾ ತನಗೆ ಲಭ್ಯವಾದ ರಾಜ್ಯ, ಪತ್ನಿ, ಸುತರೊಂದಿಗೆ  , ( ಅವರ / ಅದರ ಮಹತ ವನ್ನು ತಿಳಿದು) ಆನಂದದಿಂದ ಇದ್ದನು.

ನೀತಿ ಎಂಬ ಕಲ್ಪವೃಕ್ಷದ ಬಳ್ಳಿ ಫಲ ನೀಡಿಯೇ ತೀರುತ್ತದೆ

ವಸ್ತ್ರಗಳನ್ನೂ ಆಭರಣಗಳನ್ನೂ ನೀಡಿ ಗೌರವಿಸಿದನು


Comments

Popular posts from this blog

ತಡವಾಗಿ ಓದಿದ ನಾಲ್ಕೈದು 'ಕಸ್ತೂರಿ' ಸಂಚಿಕೆಗಳು

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"